Submission 721

ಅನ್ನದಾತನ ಅಳಲು

ರಚನೆ : ನಾಗನಗೌಡ ಕ ಹಾದಿಮನಿ

----------------------------------

ಅನ್ನ ಕೊಡುವವನು ಜಗತ್ತಿಗೆಲ್ಲ ಹಗಲಿರುಳು ದುಡಿದು ಸಾಕಿದ ನಮ್ಮನ್ನೆಲ್ಲ ರೆಂಟೆ,ಕುಂಟೆ ಎಲ್ಲವನ್ನು ಹೆಗಲ ಮೇಲೆ ಹೊತ್ತ ಅತಿರುಷ್ಟಿ, ಅನಾರುಷ್ಟಿ ಕಷ್ಟ ನಸ್ಟಗಳನ್ನು ಎದುರಿಸಿದ ತನಗೆ ಅರಿವೇ ಇಲ್ಲದೆ ನಮ್ಮಲ್ಲೆರ ಗೇನು ಮಳದ ಹೊಟ್ಟೆಯನ್ನು ತುಂಬಿಸಿದ ಹೆಂಡರು ಮಕ್ಕಳು ಸಂಸಾರಕ್ಕಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿ ಇಟ್ಟ ತಾನು ಮಾತ್ರ ಹರಕು ಬಟ್ಟೆ ತೊಟ್ಟ ಸಾಲ ಹೊತ್ತು ಎಲ್ಲರನ್ನು ಸುಖವಾಗಿ ಇಟ್ಟ ಸುಖ ನೆಮ್ಮದಿ ಸಿಗದೇ ತಾ ದಿನ ಕಳೆದ ಲೋಕದ ಎಲ್ಲ ಜಂಜಾಟಗಳಿಗೆ ಬೇಸತ್ತು ಹೋದ ಕೊನೆಗೆ ತಾನೇ ಬೆಳೆಸಿದ ಮರಕ್ಕೆ ನೇಣು ಬಿಗಿದುಕೊಂಡು ಉಸಿರು ನಿಲ್ಲಿಸಿದ.

----------------------------------

ನೋಂದಣಿ ಐಡಿ : KPF-S1-5315

0
Votes
222
Views
1 Year
Since posted

Finished since 421 days, 11 hours and 44 minutes.

Scroll to Top